ಕೃಷಿಕಸ್ನೇಹಿ ಕೇರೆ ಹಾವು.

ದಕ್ಷಿಣಕನ್ನಡ: ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿರುವ ಜಾಗವನ್ನು ಹುಡುಕಿಕೊಂಡು ಬರೋದು ಸಹಜ. ಹೀಗೆ ಬೆಚ್ಚಗಿನ ಜಾಗದಲ್ಲಿ ಇರುವ ಹಾವಿಗೆ ತಿಳಿಯದೆ ತುಳಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಇದು ವಿಷಕಾರಿ ಹಾವುಗಳಿಗೆ ಮಾತ್ರ ಅನ್ವಯವಾಗುತ್ತೆ. ಭೂಮಿ ಮೇಲೆ ವಿಷಕಾರಿಯಲ್ಲದ ಹಲವು ಜಾತಿಯ ಹಾವುಗಳಿದ್ದು, ಅವುಗಳಲ್ಲಿ ಕೇರೆ ಹಾವು ಕೂಡಾ ಒಂದು. ಮನುಷ್ಯನಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಒಂದು ಪ್ರಕಾರದಲ್ಲಿ ಮನುಷ್ಯ ಸ್ನೇಹಿಯಾಗಿ ಈ ಕೇರಿ ಹಾವುಗಳಿವೆ.

ಕೃಷಿ ಭೂಮಿ ಹಾಗು ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವ ಜಾಗಕ್ಕೆ ಇಲಿ-ಹೆಗ್ಗಣಗಳ ತೊಂದರೆ ಹೇಳತೀರದು. ಅಂತಹ ಜಾಗದಲ್ಲೇ ಹೆಚ್ಚಾಗಿ ಠಿಕಾಣಿ ಹೂಡುವ ಈ ಕೇರಿ ಹಾವುಗಳು ಇಲಿ-ಹೆಗ್ಗಣಗಳ ಸಂತತಿಯನ್ನೇ ಸದ್ದಿಲ್ಲದೆ ಇಲ್ಲದಾಗಿಸುತ್ತೆ ಈ ಕೇರೆ ಹಾವುಗಳು. ಕೇರಿ‌ ಹಾವುಗಳ‌ ಬಗ್ಗೆ ಹಲವು ರೀತಿಯ ತಪ್ಪು ಅಭಿಪ್ರಾಯಗಳೂ ಇದ್ದು, ಇವುಗಳು ತಮ್ಮ ಬಾಲದಿಂದ ಹೊಡೆಯುತ್ತವೆ ಅನ್ನೋದು ಇವುಗಳಲ್ಲಿ ಒಂದು.

ಹಾಗಾದರೆ ಕೇರೆ ಹಾವುಗಳು ನಿಜವಾಗಿಯೂ ತಮ್ಮ ಬಾಲದ ಮೂಲಕ ಎದುರಾಳಿಗೆ ಹೊಡೆಯುತ್ತದೆಯೋ ಅನ್ನೋದಕ್ಕೆ ಉರಗತ್ಞರು ಹೇಳೋದೇ ಬೇರೆ. ಕೇರೆ ಹಾವುಗಳು ಯಾವತ್ತೂ ತಮ್ಮ ಬಾಲದ ಮೂಲಕ ಹೊಡೆಯುವುದಿಲ್ಲ ಎನ್ನುತ್ತಾರೆ ನುರಿತ ಉರಗತಜ್ಞರು. ಕೇರೆ ಹಾವುಗಳು ಅಪಾಯದ ಸಂದರ್ಭದಲ್ಲಿ ಓಡಿ ಹೋಗುವ ಸಂದರ್ಭಗಳಲ್ಲಿ ಕೆಲವೊಮ್ಮೆ ತಮ್ಮ ಬಾಲವನ್ನು ಮೇಲ್ಮುಖವಾಗಿ ಮಾಡಿ ಓಡುತ್ತವೆ.

ತಮ್ಮ ಹರಿಯುವ ವೇಗ ಹೆಚ್ಚಿಸಿಕೊಳ್ಳುವ ಉದ್ಧೇಶದಿಂದ ಕೇರೆ ಹಾವುಗಳು ಈ ರೀತಿ ಮಾಡುತ್ತವೆ ವಿನಹ ಆಕ್ರಮಣ ಮಾಡುವ ದೃಷ್ಟಿಯಿಂದ ಈ ರೀತಿ ಮಾಡೋದಿಲ್ಲ ಎನ್ನೋದು ಉರಗತಜ್ಞರ ಅನುಭವದ ಮಾತಾಗಿದೆ. ಕೇರೆ ಹಾವುಗಳು ಕೃಷಿಕರ ಸ್ನೇಹಿತನಾಗಿದ್ದು, ಇವುಗಳು ಇರುವ ಕಾರಣಕ್ಕೇ ಇಲಿ-ಹೆಗ್ಗಣಗಳಿಂದ ನಾಶವಾಗುವ ಲಕ್ಷಾಂತರ ಮೌಲ್ಯದ ಆಹಾರ ದಾಸ್ತಾನಗಳು ಸುರಕ್ಷಿತವಾಗಿ ಉಳಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಕೇರೆ ಹಾವುಗಳ ಮೇಲಿನ ತಪ್ಪು ಕಲ್ಪನೆಗಳಿಂದ ಜನ ಕೇರೆ ಹಾವುಗಳನ್ನು ಕೊಲ್ಲುವ ಪ್ರಕ್ರಿಯೆಯಲ್ಲೂ ತೊಡಗುತ್ತಿದ್ದು, ಇವುಗಳ ಸಂಖ್ಯೆ ಕುಸಿಯಲೂ ಕಾರಣವಾಗುತ್ತಿವೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಶಿರೂರು ಶಾಲೆಯಲ್ಲಿ SSLC ರಿಸಲ್ಟ್ ಚಮತ್ಕಾರ ಗುರುಚರಣಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ ; ಕಠಿಣ ಶ್ರಮಕ್ಕೆ ಒಲಿದ ‘ಫಲಿತಾಂಶ’ದ ಭಾಗ್ಯ!
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.