
ಬೆಳ್ತಂಗಡಿ: ಮಂಗಳೂರು – ವಿಲ್ಲಂಪುರ ರಾಷ್ಟೀಯ ಹೆದ್ದಾರಿಯ ಮುಂಡಾಜೆ ಕಾಪು ಎಂಬಲ್ಲಿ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷಗೊಂಡ ಘಟನೆ ಸೆ. 22ರಂದು ಮಧ್ಯಾಹ್ನ 3 ಗಂಟೆ ವೇಳೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಹರಿಯವ ನದಿಯಲ್ಲಿ ಆನೆ ಸಂಚಾರಿಸುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಹೆದ್ದಾರಿಗೆ ಸುಮಾರು 50 ಮೀಟರ್ ದೂರದಲ್ಲಿ ಆನೆಯನ್ನು ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಅಟ್ಟಿಸಿದಾರೆ.


