ಬೈಂದೂರು ಚಾತುರ್ಮಾಸ 2026: ಸಿದ್ಧಿ ಸಮಾಧಿ ಯೋಗ ವಲಯದಿಂದ ಗೋಳಿಹೊಳೆಗೆ ಭಕ್ತಿಪೂರ್ವಕ ಪಾದಯಾತ್ರೆ

​ಬೈಂದೂರು: ತಾಲೂಕಿನ ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವ್ರತಚರಣೆಯು ಭಕ್ತಿ-ಶ್ರದ್ಧೆ ಹಾಗೂ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಯಶಸ್ವಿಯಾಗಿ ಮುಂದುವರಿದಿದೆ.
​ಇಂದು (ಆಗಸ್ಟ್ 09, 2026) ಚಾತುರ್ಮಾಸ ವ್ರತಚರಣೆಯ ಅಂಗವಾಗಿ ಸಿದ್ಧಿ ಸಮಾಧಿ ಯೋಗ ಬೈಂದೂರು ವಲಯದ ವತಿಯಿಂದ ನೂರಾರು ಭಕ್ತರು ಒಗ್ಗೂಡಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.


​ಯಡ್ತರೆ ಸರ್ಕಲ್‌ನಿಂದ ಹೊರಟ 300ಕ್ಕೂ ಅಧಿಕ ಸಂಖ್ಯೆಯ ಭಕ್ತರು, ವಿನಾಯಕ ದೇವಸ್ಥಾನದವರೆಗೆ ಪಾದಯಾತ್ರೆಯ ಮೂಲಕ ಸಾಗಿ ಭಕ್ತಿಪೂರ್ವಕವಾಗಿ ಸಾಗಿದರು. ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನವನ್ನು ತಲುಪಿದ ಪಾದಯಾತ್ರಿಗಳು ಶ್ರೀಗಳ ದರ್ಶನ ಪಡೆದು, ಅವರ ಅಮೃತವಾಣಿಯನ್ನು ಆಲಿಸಿ ಪರಮಪೂಜ್ಯರ ದಿವ್ಯ ಆಶೀರ್ವಾದವನ್ನು ಪಡೆದರು.


​ಧಾರ್ಮಿಕ ಭಾವನೆಯ ಸಂಚಲನ
ಕ್ಷೇತ್ರದ ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿದಿನವೂ ವಿವಿಧ ಗ್ರಾಮಗಳ ಭಕ್ತರು ವಿಭಿನ್ನ ಶೈಲಿಯಲ್ಲಿ ಮತ್ತು ವಿನೂತನ ಕಾರ್ಯಕ್ರಮಗಳೊಂದಿಗೆ ಚಾತುರ್ಮಾಸ ವ್ರತಚರಣೆಗೆ ಆಗಮಿಸುತ್ತಿದ್ದಾರೆ. ಈ ಅಪರೂಪದ ಧಾರ್ಮಿಕ ಆಚರಣೆಯು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಬೈಂದೂರು ಕ್ಷೇತ್ರದಾದ್ಯಂತ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಭಾವನೆ ಗಣನೀಯವಾಗಿ ಹೆಚ್ಚಲು ಈ ಚಾತುರ್ಮಾಸ ಮಹತ್ವದ ಸಾಕ್ಷಿಯಾಗುತ್ತಿದೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ

Star Of Kudla

Learn More →

Leave a Reply

Your email address will not be published. Required fields are marked *