
ಪಕ್ಷ ಬಲವರ್ಧನೆಯಲ್ಲಿ ಯುವಕರ ಪಾತ್ರ ಮಹತ್ತರವಾದದ್ದು – ಕೃಷ್ಣಪ್ರಸಾದ್ ಆಳ್ವ..
ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಪುತ್ತೂರು..
ಸರ್ಕಾರದ, ಶಾಸಕರ ಪ್ರತೀ ಕೆಲಸ ಕಾರ್ಯಗಳನ್ನು ಮನೆ ಮನೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.. ಶ್ರೀ ಪ್ರಸಾದ್ ಪಾಣಾಜೆ .. ಕಾರ್ಯದರ್ಶಿ ರಾಜ್ಯ ಯುವ ಕಾಂಗ್ರೆಸ್
ಪ್ರತೀ ವಲಯಗಳಿಗೆ ಭೇಟಿ ನೀಡಿ ಯುವಕರನ್ನು ಸಂಘಟಿಸುವ ಕಾರ್ಯ ಮಾಡುತ್ತೇವೆ. ಫಾರೂಕ್ ಪೆರ್ನೆ ಅಧ್ಯಕ್ಷರು ಯುವಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರ
ಪುತ್ತೂರು ಯುವ ಕಾಂಗ್ರೆಸ್ ಸಭೆಯು ಶಾಸಕರಾದ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರಾದ ಅಖಿಲ್ ಕಲ್ಲಾರೆಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಕೃಷ್ಣ ಪ್ರಸಾದ್ ಆಳ್ವಾರವರು ಪಕ್ಷ ಸಂಘಟನೆಯಲ್ಲಿ ಯುವಕರ ಪಾತ್ರ ಮಹತ್ವವಾದದ್ದು ಆದ್ದರಿಂದ ಸಂಘಟನೆಗೆ ಒತ್ತುಕೊಟ್ಟು ಯುವಕಾಂಗ್ರೆಸ್ ಕಾರ್ಯಕ್ರಮ ರೂಪಿಸಬೇಕು. ಈಗ ಯುವಕರನ್ನು ಒಟ್ಟುಗೂಡಿಸಲು ಪೂರಕವಾದ ವಾತಾವರಣವಿದೆ ಯುವಕರು ಬಲಿಷ್ಠ ವಾದರೆ ಪಕ್ಷ ಇನ್ನಷ್ಟು ಬಲಿಷ್ಠ ವಾಗುತ್ತದೆ.. ಯುವಕಾಂಗ್ರೆಸ್ ನ ಒಳ್ಳೆಯ ಪ್ರತೀ ಕಾರ್ಯದಲ್ಲೂ ಬ್ಲಾಕ್ ಕಾಂಗ್ರೆಸ್ ಜೊತೆಗಿರುವುದಾಗಿ ತಿಳಿಸಿದರು..
ಸರ್ಕಾರದ, ಶಾಸಕರ ಪ್ರತೀ ಕೆಲಸ ಕಾರ್ಯಗಳನ್ನು ಮನೆ ಮನೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.. ಶ್ರೀ ಪ್ರಸಾದ್ ಪಾಣಾಜೆ .. ಕಾರ್ಯದರ್ಶಿ ರಾಜ್ಯ ಯುವ ಕಾಂಗ್ರೆಸ್
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಸಾದ್ ಪಾಣಾಜೆ ಯವರು ರಾಜ್ಯ ಯುವಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಮಾಡಿದ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.. ನಮ್ಮ ಶಾಸಕರು ಮೆಡಿಕಲ್ ಕಾಲೇಜು ತರುವಲ್ಲಿ ಇತಿಹಾಸ ನಿರ್ಮಿಸಿ ಎಲ್ಲಾ ಟೀಕೆಗಳಿಗೆ ಅಭಿವೃದ್ಧಿಯ ಮೂಲಕವೇ ಉತ್ತರವನ್ನು ಕೊಟ್ಟಿದ್ದಾರೆ.. ಯುವಕಾಂಗ್ರೆಸ್ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು..
ಪ್ರತೀ ವಲಯಗಳಿಗೆ ಭೇಟಿ ನೀಡಿ ಯುವಕರನ್ನು ಸಂಘಟಿಸುವ ಕಾರ್ಯ ಮಾಡುತ್ತೇವೆ. ಫಾರೂಕ್ ಪೆರ್ನೆ ಅಧ್ಯಕ್ಷರು ಯುವಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರ
ಫಾರೂಕ್ ಪೆರ್ನೆ ಮಾತನಾಡಿ ಎಲ್ಲರ ಸಹಕಾರದಿಂದ ಪ್ರತಿ ವಲಯ ಭೇಟಿ ಮಾಡಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿ ಮೂಲಕ ಯುವಕರನ್ನು ಒಟ್ಟುಗೂಡಿಸುತ್ತೇವೆ.. ಈಗಾಗಲೇ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಯುವಕಾಂಗ್ರೆಸ್ ಟಾಸ್ಕ್ ಫೋರ್ಸ್ ರಚಿಸಿದ್ದು ಮೋನು ಬಪ್ಪಳಿಗೆಯವರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು....
ಸಭೆಯ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದ ಅಖಿಲ್ ಕಲ್ಲಾರೆಯವರು ಎಲ್ಲರ ಸಹಕಾರ ಕೋರಿದರು... ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಶಂಸುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು...
ವಿಮಾನ ದುರಂತದಲ್ಲಿ ಮಡಿದವರಿಗೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು….
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಉಪಾಧ್ಯಕ್ಷರಾದ ಆಶಿಕ್ ಸಂಪ್ಯ, ರಹಿಮಾನ್ ಸಂಪ್ಯ, ಪ್ರಧಾನ ಕಾರ್ಯದರ್ಶಿ ನವೀನ್ ಬನ್ನೂರು , ಮೋನು ಬಪ್ಪಳಿಗೆ ವೇದಿಕೆಯಲ್ಲಿದ್ಧರು… ಅಕ್ಕು ಈಶ್ವರಮಂಗಲ, ಅಬ್ದುಲ್ ಲತೀಫ್, ಪ್ರದೀಪ್ ಕುಂಟಾಪು , ತಾಹಿರ್, ಕೃಷ್ಣ ಪ್ರಸಾದ್, ಶ್ರೀಧರ್ ಕೆ, ಸಿರಾಜ್, ರಾಕೇಶ್ ರೈ, ದೇವಿಪ್ರಸಾದ್ ಶೆಟ್ಟಿ, ಅಭಿಲಾಷ್ ಪೂಜಾರಿ, ದಾಮೋದರ್ ಭಂಡಾರ್ಕರ್, ಶ್ಯಾಮ್ ಸುಂದರ್ ಕೊಳ್ತಿಗೆ ,ಶಶಿಕಿರಣ್ ರೈ ನೂಜಿಬೈಲು, ರವೀಂದ್ರ ರೈ ನೆಕ್ಕಿಲು, ವಿಜಯ್ ಕಾರ್ತೀಕ್, ಸರ್ವೇಶ್ ರಾಜ್ ಅರಸ್, ಸುಮಂತ್ ಸಿ ಎಸ್, ಮಹಮ್ಮದ್ ಅಲಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಶರೂನ್ ಸಿಕ್ವೇರ, ವಿಶ್ವಜಿತ್ ಅಮ್ಮುಂಜೆ, ಪ್ರಶಾಂತ್ , ಶಿಹಾಬುದ್ದೀನ್ ಗೋಳಿತ್ತಡಿ, ಅರ್ಷದ್ ದರ್ಬೆ,ಅಬ್ದುಲ್ ಖಾದರ್ ಮೇರ್ಲ ಅಭಿಷೇಕ್ ಆಚಾರ್ಯ ಬ್ಲಾಕ್ ಕಾಂಗ್ರೆಸ್ ಹಾಗೂ ಯುವಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬ್ಲಾಕ್ ವತಿಯಿಂದ ಗೌರವಿಸಲಾಯಿತು…
