
ವಾಹನ ಆಫಘಾತದಿಂದಾಗಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಅರ್ಯಾಪು ಗ್ರಾಮ, ದೇವಸ್ಯದ ಶಂಕರ್ ನಾಯಕ್ ಅವರ ಮನೆಗೆ ಭೇಟಿ ನೀಡಿ ಅವರ ಅರೋಗ್ಯ ವಿಚಾರಿಸಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ಸಹಕಾರದ ಚೆಕ್ ನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀರಾಮ್ ಭಟ್, ಕೋಶಾಧಿಕಾರಿ ರೂಪೇಶ್ ನಾಯ್ಕ್, ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ಪ್ರಮುಖರಾದ ರವಿ ಕುಮಾರ್ ರೈ ಮಠ, ಪ್ರಜ್ವಲ್ ಘಾಟೆ, ನವೀನ್ ರೈ ಕುಂಜೂರ್ ಪಂಜ, ನವೀನ್ ಕುಲಾಲ್,
ಪ್ರವೀಣ್ ದೊಡ್ಡಡ್ಕ ಪ್ರಸಾದ್ ಬಲ್ಯಾಯ ಸೇರಿದಂತೆ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.


