ಉಡುಪಿ: 16ವರ್ಷ ಬಾಲಕನ ಶವ ಹೊಳೆಯಲ್ಲಿ ಪತ್ತೆ

ಉಡುಪಿ: ಕುಕ್ಕುಂದಿ ಹೊಳೆಯ ಬಳಿಯ ಮಡಿಸಲಿನ ಹೊಳೆ ಯಲ್ಲಿ ನವೆಂಬರ್ 10ರಂದು ಸಂಜೆ ಸುಮಾರು 4 ಗಂಟೆಯ ಸುಮಾರಿಗೆ 16 ವರ್ಷದ ಬಾಲಕ ಶ್ರೀಶಾನ್ ಶೆಟ್ಟಿ ಅವರ ಶವ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಕುಕ್ಕುಂಜಾರು, ಪೇರ್ಡೂರು, ಅನಂತಪದ್ಮನಾಭ ನಿಲಯದ ಕಾರುನಾಕರ ಶೆಟ್ಟಿ ಅವರು ತಮ್ಮ ಮಗನ ಸಾವಿನಲ್ಲಿ ಸಂಶಯಾಸ್ಪದ ಅಂಶಗಳಿವೆ ಎಂದು ಪೊಲೀಸರು ದೂರು ನೀಡಿದ್ದಾರೆ.

ದೂರು ಪ್ರಕಾರ, ಹಿರಿಯಡ್ಕ ಸರ್ಕಾರಿ ಹೈಸ್ಕೂಲ್ ನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಶ್ರೀಶಾನ್, ನವೆಂಬರ್ 9ರಂದು ಮಧ್ಯಾಹ್ನ 12:15ಕ್ಕೆ ತಂದೆಯೊಂದಿಗೆ ಪೇರ್ಡೂರಿಗೆ ಬಂದಿದ್ದರು. ಅಲ್ಲಿಂದ ಅಲಂಗಾರ್‌ನಲ್ಲಿ ಇರುವ ಅಜ್ಜಿಯ ಮನೆಯನ್ನು ಕಡೆಗೆ ತೆರಳಿದ್ದರು. ನಂತರ ಅಜ್ಜಿಯ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿ ಹತ್ತಿರದ ನದಿಯ ಬಳಿಯಲ್ಲಿ ಆಟವಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು. ಆದರೆ ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಮರಳದ ಕಾರಣ ಕುಟುಂಬ ಸದಸ್ಯರು ಸುತ್ತಮುತ್ತ ಹುಡುಕಿದರೂ ಅವರ ಸುಳಿವು ಸಿಕ್ಕಿರಲಿಲ್ಲ.

ದೂರಿನಲ್ಲಿ, ಯಾರಾದರೂ ಬಾಲಕನನ್ನು ಪ್ರಲೋಭನೆಗೊಳಿಸಿ ಅಥವಾ ಮೋಸ ಮಾಡಿ ಕರೆದುಕೊಂಡು ಹೋಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಜೊತೆಗೆ ‘ನವೀನ್’ ಎಂಬ ವ್ಯಕ್ತಿಯೊಂದಿಗೆ ಹೋಗಿರಬಹುದು ಎಂಬ ಮಾಹಿತಿ ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರದ ದಿನ ಶ್ರೀಶಾನ್ ಅವರ ಶವ ಮಡಿಸಲಿನ ಹೊಳೆಯಲ್ಲಿ ಪತ್ತೆಯಾಯಿತು. ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಪ್ರಕರಣ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಾಗಿದ್ದು, ದೂರಿನಲ್ಲಿ ಉಲ್ಲೇಖವಾದ ನವೀನ್ ಎಂಬ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ.

ಕೆಎಂಸಿ ಮಣಿಪಾಲದಿಂದ ಮರಣ ವರದಿ ಹಾಗೂ ಎಫ್‌ಎಸ್ಎಲ್ ವರದಿ ಬಂದ ನಂತರ ಯಾವುದೇ ಸುಳಿವು ಸಿಕ್ಕರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?