ಮುಂದುವರಿದ ಅಭಿಷೇಕ್​ ಆತ್ಮಹತ್ಯೆ ಪ್ರಕರಣ ತನಿಖೆ

ಉಡುಪಿ: ಅಭಿಷೇಕ್​ ಆತ್ಮಹತ್ಯೆ ಪ್ರಕರಣ ತನಿಖೆ ಮುಂದುವರಿದಿದ್ದು, ಆರೋಪಿಗಳ ಡಿಜಿಟಲ್​ ಸಾಧನಗಳಾದ ಫೋನ್​ ಸಂಪರ್ಕ, ಬ್ಯಾಂಕ್​ ವಹಿವಾಟುಗಳು, ಫೋನ್​ ಮತ್ತು ಚಾಟ್​ ದಾಖಲೆಗಳ ಆಧಾರದ ಮೇಲೆ ಆರೋಪಿಗಳನ್ನು ವಿವರವಾಗಿ ವಿಚಾರಣೆ ಮಾಡಲಾಗಿದೆ ಎಂದು ಎಸ್​ಪಿ ಹರಿರಾಂ ಶಂಕರ್​ ತಿಳಿಸಿದ್ದಾರೆ.
ಹನಿ ಟ್ರ್ಯಾಪ್​ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ. ಆರೋಪಿ ಹುಡುಗಿಯ ಫೋನ್​ನಲ್ಲಿ ಯಾವುದೇ ಅಶ್ಲೀಲ ಫೋಟೋಗಳು ಅಥವಾ ವೀಡಿಯೊಗಳಿಲ್ಲ. ಯಾವುದೇ ವೀಡಿಯೊಗಳನ್ನು ಫಾರ್ವರ್ಡ್​ ಮಾಡಿಲ್ಲ. ಅಭಿಷೆೇಕ್​ ಹುಡುಗಿಗೆ ವರ್ಗಾಯಿಸಿದ ಎಲ್ಲಾ ಹಣವನ್ನು ಸೆಪ್ಟೆಂಬರ್​ನಲ್ಲಿ ಹುಡುಗಿ ಹಿಂತಿರುಗಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೂ ಮುನ್ನ, ಅಭಿಷೇಕ್​ ಲೇಡಿ ಗೋಶೆನ್​ ಸಹೋದ್ಯೋಗಿಗಳೊಂದಿಗೆ ವಾಟ್ಸಾಪ್​ ಗುಂಪಿನಲ್ಲಿ ಆರೋಪಿ ಹುಡುಗಿಯ ಕೆಲವು ಅಶ್ಲೀಲ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ, ಆರೋಪಿ ಹುಡುಗಿ ಕರೆ ಮಾಡಿ ಪೊಲೀಸ್​ ದೂರು ದಾಖಲಿಸುವುದಾಗಿ ಹೇಳಿದ್ದಳು. ಈಗ ಪ್ರಸಾರವಾಗುತ್ತಿರುವ ವೀಡಿಯೊಗಳನ್ನು ಆರೋಪಿ ಹುಡುಗಿಯ ಸ್ನೇಹಿತ ಆಕೆಗೆ ಕಳುಹಿಸಿದ ಖಾಸಗಿ ವೀಡಿಯೋ. ಇದನ್ನು ಅಭಿಷೇಕ್​ ಆಕೆಯ ವಾಟ್ಸಪ್​ಗೆ ಲಿಂಕ್​ ಪಡೆದು ತೆಗೆದುಕೊಂಡಿದ್ದ ಎಂದು ತಿಳಿಸಿದ್ದರು.
ಅಭಿಷೆೇಕ್​ ಫೋನ್​ ವಿಶ್ಲೇಷಣೆಗಾಗಿ ಎ್​ ಎಸ್​ ಎಲ್​ಗಾಗಿ ಕಳುಹಿಸಲಾಗಿದೆ. ಆರೋಪಿ ಹುಡುಗಿ ಲೇಡಿ ಗೋಶೆನ್​ನಲ್ಲಿ ತನ್ನ ಸ್ನೇಹಿತನ ಒಂದು ವೀಡಿಯೊವನ್ನು (ಉಡುಗೆ ಬದಲಾವಣೆ) ರೆಕಾರ್ಡ್​ ಮಾಡಲು ಕಾರಣವನ್ನು ಪರಿಶೀಲಿಸುತ್ತೇವೆ. ವೀಡಿಯೊವನ್ನು ಯಾವುದೇ ಸುಲಿಗೆ ಉದ್ದೇಶಗಳಿಗಾಗಿ ಫಾರ್ವರ್ಡ್​ ಮಾಡಲಾಗಿದೆಯೇ ತಿಳಿದುಕೊಳ್ಳಲಾಗುವುದು. ಆತ್ಮಹತ್ಯೆ ಟಿಪ್ಪಣಿಯ ಕೈಬರಹವನ್ನು ಪರಿಶೀಲನೆ ನಡೆಸಲಾಗುವುದು. ತನಿಖೆ ಇನ್ನೂ ಮುಕ್ತಾಯಗೊಂಡಿಲ್ಲ ಎಂದಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!