ಪತ್ತನಾಜೆಯಲ್ಲಿ ಪಿಲಿಚಾಮುಂಡಿಯ ಆರಾಧನೆ ಯಾಕೆ ನಡೆಯುತ್ತೆ ಗೊತ್ತಾ?

ದಕ್ಷಿಣಕನ್ನಡ: ದೈವಗಳ ನಾಡು ತುಳುನಾಡಿನಲ್ಲಿ ಆಚರಣೆಯಲ್ಲಿ ಪತ್ತನಾಜೆ ಎನ್ನುವ ತಿಂಗಳುಗಳಲ್ಲಿ ತುಳುನಾಡಿನಲ್ಲಿ ಯಾವುದೇ ರೀತಿಯ ದೈವಗಳ ಕೋಲ,ತಂಬಿಲಗಳು ನಡೆಯೋದಿಲ್ಲ. ಸುಮಾರು 3 ತಿಂಗಳ ಕಾಲ ತುಳುನಾಡಿನಲ್ಲಿ ಪತ್ತನಾಜೆ ಮುಂದುವರಿದು, ದೀಪಾವಳಿಯ ವೇಳೆಗೆ ಅದು ಮುಕ್ತಾಯವಾಗುತ್ತೆ. ಆದರೆ ಪತ್ತನಾಜೆಯ ತಿಂಗಳಲ್ಲೂ ತುಳುನಾಡಿನ ಕೆಲವು ದೈವಗಳಿಗೆ ಮಾತ್ರ ನೇಮೋತ್ಸವ ನಡೆಯುತ್ತದೆ. ಪುದ್ವಾರ್ ನೇಮ ಎಂದು ಇದನ್ನು ಕರೆಯಲಾಗುತ್ತಿದ್ದು, ಕೆಲವೇ ಕೆಲವು ದೈವಸ್ಥಾನಗಳಲ್ಲಿ ಮಾತ್ರವೇ ಈ ನೇಮ ನಡೆಯುತ್ತೆ.

ತುಳುನಾಡಿನಲ್ಲಿ ಹಲವು ಪ್ರಕಾರದ ದೈವಗಳಿದ್ದು, ಅವುಗಳಲ್ಲಿ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಟ್ಟಿವೆ. ರಾಜನ್ ದೈವ ಎಂದು ಕರೆಯುವ ಈ ದೈವಗಳ ಚಾವಡಿಗಳಲ್ಲಿ ಪುದ್ವಾರ್ ನೇಮ ನಡೆಯುತ್ತೆ. ಪುದ್ವಾರ್ ಎಂದರೆ ಹೊಸ ಅಕ್ಕಿ ಊಟ ಎನ್ನುವ ಕನ್ನಡ ಅರ್ಥ ಬರುತ್ತೆ. ಉಳ್ಳಾಕುಲು, ಪಿಲಿಚಾಮುಂಡಿ, ಶಿರಾಡಿ ದೈವ ಹೀಗೆ ಕೆಲವು ಪ್ರಧಾನ ದೈವಗಳ ಸ್ಥಾನಗಳಲ್ಲಿ ಮಾತ್ರವೇ ಈ ಪುದ್ವಾರ್ ನೇಮ ನಡೆಯುತ್ತದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಪಡುಮಲೆಯ ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ವ್ಯಾಪ್ತಿಗೆ ಬರುವ ಪಿಲಿ ಚಾಮುಂಡಿ ದೈವಸ್ಥಾನದಲ್ಲೂ ಈ ಪುದ್ವಾರ್ ನೇಮೋತ್ಸವವು ಪ್ರತೀ ವರ್ಷವೂ ತುಲಾ ಸಂಕ್ರಮಣದಂದು ನಡೆಯುತ್ತದೆ.

ದೈವಸ್ಥಾನಕ್ಕೆ ಸಂಬಂಧಪಟ್ಟ ಗ್ರಾಮಸ್ಥರ ಜೊತೆಗೆ ಇತರ ಗ್ರಾಮದ ಜನ ಕೂಡಾ ಈ ಪುದ್ವಾರ್ ನೇಮವನ್ನು ನೋಡಿ, ದೈವ ಹೊಸಕ್ಕಿಯ ಊಟ ಸ್ವೀಕರಿಸಿದ ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಹೊಸಕ್ಕಿ ಊಟ ಮಾಡೋದು ಈ ನೇಮೋತ್ಸವದ ಹಿಂದಿರುವ ಉದ್ಧೇಶವೂ ಆಗಿದೆ.

ಪಿಲಿ ಚಾಮುಂಡಿ ದೈವವು ತುಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿ ದೈವವಾಗಿದ್ದು, ಸ್ತ್ರೀ ಪ್ರಧಾನ ದೈವವಾಗಿರುವುದರಿಂದ ದೇವಿಯ ಪ್ರತಿರೂಪವಾಗಿಯೂ ಈ ದೈವವನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಅತ್ಯಂತ ಆಕರ್ಷಕ ಮುಖವರ್ಣಿಕೆಯ ಜೊತೆಗೆ ರೌದ್ರ ರೂಪದ ಈ ದೈವದ‌ ನರ್ತನವು ದೈವದ ಮೇಲಿನ ಭಯ-ಭಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನೇಮೋತ್ಸವ ಪ್ರಾರಂಭವಾಗುವ ಮೊದಲು ಕ್ಷೇತ್ರದ ಪ್ರಧಾನ ದೈವಗಳಾದ ಕಿನ್ನಿಮಾಣಿ-ಪೂಮಾಣಿ ದೈವದ ನಡೆಯಲ್ಲಿ ಪ್ರಾರ್ಥನೆ ನೆರವೇರಿದ ಬಳಿಕ ಪಿಲಿಚಾಮುಂಡಿ ದೈವದ ನರ್ತನ ಸೇವೆ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೈವವು ಗ್ರಾಮದ ಹಿರಿಯರನ್ನು ಮತ್ತು ದೈವಕ್ಕೆ ಸಂಬಂಧಪಟ್ಟವರಲ್ಲಿ ಕೆಲವು ವಿಚಾರಗಳನ್ನು ಹೇಳುವ ಮತ್ತು ಸೂಚಿಸುವ ಮೂಲಕ ಭೂಮಿಯ ಮೇಲೆ ತನ್ನ ಇರುವಿಕೆಯನ್ನೂ ಪ್ರಕಟಪಡಿಸುತ್ತದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?