
ಜನವರಿ 18 ಮತ್ತು 19 ರಂದು ಉದ್ಯಾವರ ಗ್ರಾಮ ಪಂಚಾಯತ್ ಸ್ಟೇಡಿಯಂನಲ್ಲಿ ನಡೆದ 7ನೇರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕೂಟದಲ್ಲಿ ಸೋಮೇಶ್ವರದ ರಘುನಾಥ ನಾಯ್ಕ ಮತ್ತು ಚಂದ್ರಾವತಿ ಇವರ ಪುತ್ರನಾದ ರಿತೇಶ್ ಆರ್ ಇವರು ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 2 ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಇವರು ರೆನ್ಸಿ ಸೋಮನಾಥ ಮತ್ತು ಡಾ| ವಿಜಯಲಕ್ಷ್ಮಿ ಆರ್. ನಾಯಕ್ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ. ಹಾಗು ಪಿ.ಆರ್.ಎನ್.ಅಮೃತಭಾರತಿ ಕಾಲೇಜು ಇಲ್ಲಿಯ ವಿದ್ಯಾರ್ಥಿ ಯಾಗಿರುತ್ತಾರೆ.


