



ಪುತ್ತೂರು ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರ್ಗಾಪ್ರಸಾದ್ ರವರು ಸರ್ಕಾರದ ಆದೇಶದಂತೆ ಉಡುಪಿ ನಗರಸಭೆಗೆ ವರ್ಗಾವಣೆಗೊಂಡಿದ್ದು ಪುತ್ತೂರು ನಗರಸಭೆ ಹಾಗೂ ನಗರಸಭೆಯ ನೌಕರರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಇವತ್ತು(13/06/2024) ನಗರಸಭೆಯ ಸಭಾಂಗಣದಲ್ಲಿ ಏರ್ಪಡಿಸಲಾಯ್ತು. ಪೌರಾಯುಕ್ತರಾದ ಶ್ರೀ ಮಧು S. ಮನೋಹರ್ ರವರು ಸನ್ಮಾನಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಮುದಾಯ ಸಂಘಟನಾಧಿಕಾರಿ ಹಾಗೂ ನೌಕರರ ಸಂಘದ ಅಧ್ಯಕ್ಷರಾದ ಕರುಣಾಕರ ವಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಶಬರೀನಾಥ್, ಕಚೇರಿ ವ್ಯವಸ್ಥಾಪಕ ಹಾಗೂ ಲೆಕ್ಕಾಧಿಕ್ಷಕರಾದ ಸಿ ಆರ್.ದೇವಾಡಿಗ, ನಗರಸಭಾ ಸದಸ್ಯರಾದ ಯೂಸುಫ್, ಸಹಾಯಕ ಅಭಿಯಂತರರಾದ ಕೃಷ್ಣಮೂರ್ತಿ ರೆಡ್ಡಿ, ಕಂದಾಯಾಧಿಕಾರಿ ಪ್ರಕಾಶ್ ಮೂಲ್ಯ, ಸಂಘದ ಪದಾಧಿಕಾರಿಗಳಾದ ರಾಜೇಶ್ ನಾಯ್ಕ್, ಪುರುಷೋತ್ತಮ,ಶ್ವೇತಾಕಿರಣ್,ವಿನೋದ್ ಜೋಷಿ,ವಸಂತ,ಜಯಲಕ್ಷ್ಮಿ ಹಾಗೂ ಎಲ್ಲಾ ನೌಕರರು, ಪೌರಕಾರ್ಮಿಕರು, ಚಾಲಕರು,ಸ್ಯಾನಿಟರಿ ಸೂಪರ್ವೈಸರ್ ಗಳು, ಗುತ್ತಿಗೆದಾರ ಸಂಘದವರು ಹಾಜರಿದ್ದು ಶುಭ ಹಾರೈಸಿದರು.


