ಬೆಂಗಳೂರು : ನೇಣು ಬಿಗಿದ ಸ್ಥಿತಿಯಲ್ಲಿ KAS ಅಧಿಕಾರಿ ಪತ್ನಿಯ ಮೃತದೇಹ ಪತ್ತೆ.

ಬೆಂಗಳೂರು : ಬೆಂಗಳೂರಲ್ಲಿ ಕೆಎ​ಎಸ್ ಅಧಿಕಾರಿಯ ಪತ್ನಿ ಹೈಕೋರ್ಟ್‌ ವಕೀಲೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮನೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ

ಹೈಕೋರ್ಟ್‌ ವಕೀಲೆ ಚೈತ್ರಾ ಎಂದು ತಿಳಿದುಬಂದಿದ್ದು ವಕೀಲೆಯ ಪತಿ ಕೆಎಎಸ್‌ ಅಧಿಕಾರಿ ಆಗಿದ್ದಾರೆ.ಪತಿ ಶಿವಕುಮಾರ್‌ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು ಶಿವಕುಮಾರ್‌ ಮನೆಗೆ ವಾಪಸ್‌ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದು 2016ರಲ್ಲಿ ಶಿವಕುಮಾರ್ ಹಾಗೂ ಚೈತ್ರಾ ಮದುವೆ ಆಗಿದ್ದರು ಈ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ.

ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ,ಹೈಕೋರ್ಟ್‌ ವಕೀಲರಾಗಿರುವುದರಿಂದ ಯಾವುದಾದರೂ ಪ್ರಕರಣದಲ್ಲಿ ಯಾರಾದರೂ ಬೆದರಿಕೆ ಹಾಕಿದ್ದರಾ ಅಥವಾ ಕುಟುಂಬದಲ್ಲೇ ಏನಾದರೂ ಕಲಹ ಇತ್ತಾಎಂಬುದು ತನಿಖೆಯಲ್ಲಿ ತಿಳಿಯಬೇಕಾಗಿದೆ. ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

News Editor

Learn More →

Leave a Reply

Your email address will not be published. Required fields are marked *