ಉಪಿನಂಗಡಿಯಲ್ಲಿ ಹೋಟೆಲ್ ಕಾರ್ಮಿಕನ ದುರ್ಘಟನೆ — ಕಾರಿಡಾರ್‌ನಿಂದ ಬಿದ್ದು ಸ್ಥಳದಲ್ಲೇ ಸಾವು

ಪುತ್ತೂರು: ಉಪಿನಂಗಡಿಯಲ್ಲಿ ನವೆಂಬರ್ 4ರ ಮುಂಜಾನೆ ಸಂಭವಿಸಿದ ದುರ್ಘಟನೆಯಲ್ಲಿ ಹೋಟೆಲ್ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಮೊದಲ ಮಹಡಿಯ ಕಾರಿಡಾರ್‌ನಿಂದ ಕೆಳಗಿನ ಕಾಲುವೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಮೃತರನ್ನು ಬೆಳ್ತಂಗಡಿ ತಾಲೂಕು ಉರ್ವಲ್ ಗ್ರಾಮದ ಬಣಾರಿ ಮನೆಯಲ್ಲಿ ವಾಸವಾಗಿದ್ದ ಗಣೇಶ್ ನಾಯಕ್ (60) ಎಂದು ಗುರುತಿಸಲಾಗಿದೆ.ಲಭ್ಯವಾದ ಮಾಹಿತಿಯ ಪ್ರಕಾರ, ಗಣೇಶ್ ನಾಯಕ್ ಉಪಿನಂಗಡಿಯಲ್ಲಿರುವ ಒಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ ಅವರು ಹೋಟೆಲ್‌ನ ಮೊದಲ ಮಹಡಿಯ ಕಾರಿಡಾರ್‌ಗೆ ಬಂದಾಗ ಪಾದ ಜಾರಿ ಕೆಳಗಿನ ಕಾಲುವೆಗೆ ಬಿದ್ದಿದ್ದಾರೆ. ಇದರಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತರಾಗಿದ್ದಾರೆ.ಘಟನೆಯ ನಂತರ ಮೃತರ ಪುತ್ರ ಜಗದೀಶ್ ಉಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *