
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆಗಳು ಮೇ.2 ರಂದು ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡಿದ್ದಾವೆ.
ಬಂದ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಸ್ ಗಳಿಗೆ ಕಲ್ಲು ತೂರಾಟ ನಡೆದಿದೆ
ಉದ್ರಿಕ್ತ ಗುಂಪಿನಿಂದ ಮಂಗಳೂರಿನ ಹಂಪನಕಟ್ಟೆ ಬಳಿ ಬಸ್ಸಿಗೆ ಕಲ್ಲು ತೂರಾಟ ನಡೆದಿದೆ
ಕಲ್ಲು ತೂರಾಟದಿಂದ ಮೂರು ಬಸ್ಸಿಗಳಿಗೆ ಹಾನಿಯಾಗಿದೆ ಎನ್ನಲಾಗಿದೆ
ಹಿಂದೂ ಕಾರ್ಯಕರ್ತ , ಫಾಸಿಲ್ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಬಜ್ಪೆ ಇವರ ಅಂತಿಮ ಯಾತ್ರೆ ಬೆಳಿಗ್ಗೆ 8.30 ಕ್ಕೆ ಎ.ಜೆ ಹಾಸ್ಪಿಟಲ್ ನಿಂದ ಹೊರಟು ನಂತೂರು – ಪಂಪ್ವೆಲ್ ಪಡೀಲ್ ಬಿಸಿರೋಡ್ ಬಂಟ್ವಾಳ ಮಾರ್ಗವಾಗಿ ಕಾರಿಂಜದ ತನ್ನ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಹಿಂದೂ ಸಂಘಟನೆಗಳ ಪ್ರಮುಖರೋರ್ವರು ತಿಳಿಸಿದ್ದಾರೆ.


