
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೋರ್ನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯ ವ್ಯಾಪ್ತಿಗೆ ಬರುವ ಹೆಡಗಿನಬೆಲೆ ಗ್ರಾಮದಲ್ಲಿ ಸರಿ ಸುಮಾರು ವರ್ಷಗಳಿಂದ ಸತತವಾಗಿ ಚರಂಡಿ ಶುದ್ದೀಕರಣ ಇಲ್ಲದೆ ಚರಂಡಿಯ ನೀರು ರಸ್ತೆಯ ಮೇಲೆ ಹರಿದಾಡಿತಿದ್ದು ಸಾರ್ವಜನಿಕರಿಗೆ ಓಡಾಡುವುದಕ್ಕೆ ಆಗುತ್ತಿಲ್ಲ ಹಾಗೂ ಅಗಾದವಾದ ಆರೋಗ್ಯ ಸಮಸ್ಯೆಗಳನ್ನು ಒಳಗೊಳ್ಳುತ್ತಿದ್ದಾರೆ ಮಳೆ ಬಿದ್ದಾಗ ಗ್ರಾಮದ ಸಾರ್ವಜನಿಕರು ಚರಂಡಿಯ ಕೊಳಚೆ ನೀರಿನಲ್ಲಿ ಒದ್ದಾಡಬೇಕಾಗಿದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕೆಲಸಗಳು ನಡೆಯುತಿಲ್ಲ ಮತ್ತೆ .ರಾಜ ಕಾಲುವೆ. ಬೀದಿ ದೀಪಗಳು.ಕುಡಿಯುವ ನೀರಿನ ವಾಟರ್ ಪ್ಲಾಂಟ್. ಎಸ್ಸಿ ಸಮುದಾಯಗಳಲ್ಲಿ ಬೀದಿ ದೀಪಗಳ ಸಮಸ್ಯೆ .ಅಂಗನವಾಡಿ ಶಾಲೆಯ ಪಕ್ಕದಲ್ಲಿ ರಾಜ ಕಾಲುವೆ ಇದ್ದು ಅಂಗನವಾಡಿ ಮಕ್ಕಳಿಗೆ ತುಂಬಾ ಸೊಳ್ಳೆಗಳ ಕಾಟದಿಂದ ಅಲ್ಲಿರುವ ಬಾಡಿಗೆ ಮನೆಗಳಿಂದ ಬರುವ ನೀರಿನ ದುರವ್ಯವಸ್ತೆಯಿಂದ ಶಾಲೆಯ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದ್ದು ಇನ್ನೂ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತಿದೆ ತಾವೆಲ್ಲಾ ಸಂಬಂಧಪಟ್ಟ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ತೋರ್ನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತೇವೆ ಇಲ್ಲಾಂದರೆ ಮುಂದಿನ ದಿನಗಳಲ್ಲಿ ತೋರ್ನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುತ್ತೆವೆ ಎಂದು ಗ್ರಾಮಸ್ಥರು ಭೀಮಾಪುತ್ರ ವಿನೋದ್ ಎಚ್ ದಲಿತ ಮುಖಂಡ ಹಾಗೂ ಆರ್ ಟಿ ಐ ಕಾರ್ಯಕರ್ತ ಅವರಬಳಿ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿಕೊಂಡಿದಾರೆ.



