ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮಂಗಳೂರಿನ ನೇತ್ರಾವತಿ ಕ್ಯಾಬಿನ್‌ ಮತ್ತು ಮಂಗಳೂರು ಜಂಕ್ಷನ್‌ ಸ್ಟೇಷನ್‌ ಮಧ್ಯೆ ಹಳಿ ನಿರ್ವಹಣ ಕಾಮಗಾರಿ ಇರುವುದರಿಂದ ಕೆಲವೊಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ನಂ. 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ಮೇ 3 ಮತ್ತು 5ರಂದು ಬೆಳಗ್ಗೆ ಮಂಗಳೂರು ಸೆಂಟ್ರಲ್‌ನಿಂದ 5.05ರ ಬದಲು 30 ನಿಮಿಷ ತಡವಾಗಿ 5.35ಕ್ಕೆ ನಿರ್ಗಮಿಸುವುದು.

ನಂ.16610 ಮಂಗಳೂರು ಸೆಂಟ್ರಲ್‌ ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ಮೇ 3, 5ರಂದು ಮಂಗಳೂರು ಸೆಂಟ್ರಲ್‌ನಿಂದ ನಿಗದಿತ 5.45ರ ಬದಲು ಅದೇದಿನ 5.45ಕ್ಕೆ 30 ನಿಮಿಷ ತಡವಾಗಿ ತೆರಳುವುದು.

ನಂ. 16649 ಮಂಗಳೂರು ಸೆಂಟ್ರಲ್‌ ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ರೈಲು ಮೇ 8ರಂದು ಬೆಳಗ್ಗೆ ಮಂಗಳೂರು ಸೆಂಟ್ರಲ್‌ನಿಂದ 5.05ರ ಬದಲು 1.30 ಗಂಟೆ ತಡವಾಗಿ 6.35ಕ್ಕೆ ನಿರ್ಗಮಿಸುವುದು.

ನಂ. 22638 ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ ಮೇ 7ರಂದು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 11.45ರ ಬದಲು ಮೇ 8ರ 00.15 ಗಂಟೆಗೆ ಉಳ್ಳಾಲ ನಿಲ್ದಾಣದಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್‌ ಉಳ್ಳಾಲ ಮಧ್ಯೆ ಸೇವೆ ರದ್ದಾಗಿದೆ.
ನಂ. 16610 ಮಂಗಳೂರು ಸೆಂಟ್ರಲ್‌ ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ಮೇ 8ರಂದು ಬೆಳಗ್ಗೆ 5.15ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಬದಲಿಗೆ ಉಳ್ಳಾಲ ನಿಲ್ದಾಣದಿಂದ 5.45ಕ್ಕೆ ಹೊರಡಲಿದೆ.

ನಂ. 16345 ಲೋಕಮಾನ್ಯ ತಿಲಕ್‌ ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲನ್ನು ಮೇ 2ರಂದು 50 ನಿಮಿಷ, ನಂ.16312 ಕೊಚ್ಚುವೇಲಿ ಗಂಗಾನಗರ ರೈಲನ್ನು ಮೇ 4ರಂದು 2.20 ಗಂಟೆ ಕಾಲ, ನಂ.01464 ಕೊಚುವೇಲಿ ಲೋಕಮಾನ್ಯ ತಿಲಕ್‌ ರೈಲನ್ನು ಮೇ 4ರಂದು 2.10 ಗಂಟೆ, ನಂ. 22637 ವೆಸ್ಟ್‌ಕೋಸ್ಟ್‌ಎಕ್ಸ್‌ಪ್ರೆಸ್ಸನ್ನು ಮೇ 4ರಂದು 20 ನಿಮಿಷ ಕಾಲ, ಇದೇ ರೈಲನ್ನು ಮೇ 7ರಂದು 1.10 ಗಂಟೆ, ನಂ.1633ರ ನಾಗರಕೋವಿಲ್‌ ಗಾಂಧಿಧಾಮ ವೀಕ್ಲಿ ಎಕ್ಸ್‌ಪ್ರೆಸ್‌ ರೈಲನ್ನು ಮೇ 7ರಂದು 2.40 ಗಂಟೆ ನಂ. 12431 ತಿರುವನಂತಪುರಂ ಸೆಂಟ್ರಲ್‌ ಹ.ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್ಸನ್ನು ಮೇ 7ರಂದು 1.10 ಗಂಟೆ ಕಾಲ, ನಂ.12283 ಎರ್ನಾಕುಳಂ ಹಝತ್‌ ನಿಜಾಮುದ್ದೀನ್‌ ದುರಂತೊ ಎಕ್ಸ್‌ಪ್ರೆಸ್ಸನ್ನು ಮೇ 7ರಂದು 1.10 ಗಂಟೆ ಕಾಲ ತಡೆಹಿಡಿಯಲಾಗುವುದು ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?