ಮಂಜೇಶ್ವರದ ಮಾಡದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ವರಿಂದ ಲೋಕಾರ್ಪಣೆ.






ಮಂಜೇಶ್ವರ: ಮಂಜೇಶ್ವರ ಮಾಡ ಕ್ಷೇತ್ರದ ಬಳಿ ಶ್ರೀ ಸುರೇಂದ್ರ ಕೋಟ್ಯಾನ್ ರವರ ಮನದಾಳದ ಹಂಬಲದಂತೆ ಅವರು ಸ್ವತಃ ತನ್ನ ಅಂಗಡಿಯ ಒಂದು ಭಾಗದಲ್ಲಿ ಗ್ರಂಥಾಲಯ ತೆರೆದು , ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗ್ರಂಥಾಲಯದ ಉದ್ಘಾಟನೆಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ನೆರವೇರಿಸಿದರು. ಬಳಿಕ ಮಾತನಾಡಿದ ಹಾಜಬ್ಬರವರು ಸುರೇಂದ್ರ ಕೋಟ್ಯಾನ್ ರವರು ತನ್ನ ದುಡಿಮೆಯ ಒಂದು ಪಾಲನ್ನು ಗ್ರಂಥಾಲಯಕ್ಕೆ ಬೇಕಾಗಿ ಮೀಸಲಿರಿಸಿದ್ದನ್ನು ಶ್ಲಾಘಿಸಿದರು. ಕಾರ್ಯಕ್ರಮವ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲವಿನಾ ಮೊಂತೆರೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಪ್ರಸಾದ್ ಪಾಣೂರು , ನಿವೃತ್ತ ಉಪನ್ಯಾಸಕಿಯರಾದ ಡಾ. ಯು ಮಹೇಶ್ವರಿ, ಮಹಾಲಿಂಗೇಶ್ವರ ರಾಜ್ ಡಿ, ಪಂಚಾಯತು ಸದಸ್ಯರುಗಳಾದ ಅಬ್ದುಲ್ ರಹಿಮಾನ್ , ಶ್ರೀ ಲಕ್ಷ್ಮಣ ಮಂಜೇಶ್ವರ, ರಘು ಶೆಟ್ಟಿ, ವಾಮಯ ಅಂಬಿತ್ತಾಡಿ, ಗೋಪಾಲ ಶೆಟ್ಟಿ ಅರಿಬೈಲ್, ಹರೀಶ್ ಶೆಟ್ಟಿ ಮಾಡ, ತಾರನಾಥ್ ವರ್ಕಾಡಿ, ಹರಿಶ್ವಂದ್ರ ಮಂಜೇಶ್ವರ, ಕುಶಲಾಕ್ಷಿ ಕಣ್ವತೀಥ೯ ಮೊದಲಾದವರು ಉಪಸ್ಥಿತರಿದ್ದರು. ತಾರನಾಥ್ ಗಟ್ಟಿ ಕಾಪಿಕ್ಕಾಡ್ ಪ್ರಾಸ್ತವಿಕ ಮಾತುಗಳನ್ನು ಆಡಿದರು. ವಿಜಯ ಕುಮಾರ್ ಪಾವಲ ಅತಿಥಿಗಳನ್ನು ಸ್ವಾಗತಿಸಿದರು.. ಸುರೇಂದ್ರ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಶ್ರೀ ರಾಜೇಶ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.


