
ಕುಂಬಳೆ: ನಗರದಲ್ಲಿ ಕಾರು ಢಿಕ್ಕಿ ಹೊಡೆದು ನಿವೃತ್ತ ಮುಖ್ಯ ಶಿಕ್ಷಕ, ಅನಿಲ್ ಕುಂಬ್ಳೆ ರಸ್ತೆ ನಿವಾಸಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಬಾಲಕೃಷ್ಣನ್ ಚೆಟ್ಟಿಯಾರ್ (79) ಎಂದು ತಿಳಿಯಲಾಗಿದೆ. ಅವರು ಮೂಲತಃ ಚೇವಾರು ಬಾಯಾಡಿ ನಿವಾಸಿಯಾಗಿದ್ದರು ಎನ್ನಲಾಗಿದೆ.
ಸಂಜೆ ಕ್ಷೇತ್ರ ದರ್ಶನ ನಡೆಸಿ ಮನೆಗೆ ಮರಳುತ್ತಿರುವಾಗ ಬದಿಯಡ್ಕ ರಸ್ತೆಯಲ್ಲಿ ಇವರಿಗೆ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಮೃತರು ಪತ್ನಿ, ಚೇವಾರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮೀ, ಪುತ್ರ ಡಾ| ಜಯರಾಜ್ ಮತ್ತು ಪುತ್ರಿ ಕಯ್ನಾರು ಶಾಲೆಯ ಶಿಕ್ಷಕಿ ಜಯಚಂದ್ರಿಕಾ ಅವರನ್ನು ಅಗಲಿದ್ದಾರೆ. ಅವರು ಇಚ್ಲಂಗೋಡು ಇಸ್ಲಾಮಿಯಾ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


