ಶಿವಮೊಗ್ಗ: ಉಪವಾಸ ಮುಗಿಸಿ ಈಜಲು ಹೋದ ಮೂವರು ಬಾಲಕರು ನೀರುಪಾಲು.

ಶಿವಮೊಗ್ಗ : ನದಿ ತೀರದಲ್ಲಿ ಎಷ್ಟೋ ಹೆಚ್ಚರಿಕೆಯ ಬೋರ್ಡ್ ಹಾಕಿದರು ಜನಸಾಮನ್ಯರಿಗೆ ಮನವರಿಕೆ ಆಗುವುದೇ ಇಲ್ಲ.ಇತ್ತೀಚಿನ ದಿನಗಳಲ್ಲಿ ಅಂತೂ ನೀರಿನಲ್ಲಿ ಈಜಾಡಲು ಹೋದ ಯುವಕರು ಮೃತಪಟ್ಟ ಘಟನೆ ಹೆಚ್ಚಾಗಿದ್ದು ಮುನ್ನೆಚ್ಚರಿಕೆ ವಹಿಸಿದರೂ ಯಾವುದೇ ಫಲಕಾರಿಯಾಗದೆ ಇರುವುದು ಬೇಸರದ ಸಂಗತಿ.

ಶಿವಮೊಗ್ಗಜಿಲ್ಲೆಯ ತೀರ್ಥಹಳ್ಳಿ ತುಂಗಾ ನದಿಯ ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು SSLC ವಿದ್ಯಾರ್ಥಿಗಳು ನೀರುಪಾಲಾದ ಘಟನೆ ರಾಮ ಮಂಟಪದ ಬಳಿ ನಡೆದಿದೆ.

ಮೃತಪಟ್ಟ ಯುವಕರನ್ನು ರಫನ್, ಇಯನ್ ಮತ್ತು ಅರ್ಫದ್ ಎಂದು ತಿಳಿದುಬಂದಿದೆ. ರಂಜಾನ್ ಉಪವಾಸ ಮುಗಿಸಿದ ನಂತರ ತುಂಗಾ ನದಿಯಲ್ಲಿ ಈಡಾಜಲೆಂದು ರಫನ್, ಇಯನ್ ಮತ್ತು ಅರ್ಫದ್ ರಾಮ ಮಂಟಪದ ಬಳಿ ಹೋಗಿದ್ದಾರೆ. ಅದರಂತೆ ಈಜಲು ನೀರಿಗೆ ಇಳಿದಾಗ ಮೂವರು ಕೂಡ ನೀರುಪಾಲಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಮೂವರು ಬಾಲಕರ ಮೃತದೇಹವನ್ನು ಹೊರತೆಗೆದಿದ್ದಾರೆ

News Editor

Learn More →

Leave a Reply

Your email address will not be published. Required fields are marked *