ಶಾಲೆಗೆ ಮೊಬೈಲ್ ತರಬೇಡವೆಂದ ಮುಖ್ಯ ಶಿಕ್ಷಕಿಯ ಕಾರಿನ ಮೇಲೆ ಕಲ್ಲು ಎತ್ತಿಹಾಕಲು ವಿದ್ಯಾರ್ಥಿ ಯತ್ನ!!

ಶಾಲೆಗೆ ಮೊಬೈಲ್ ತರದಂತೆ ಬುದ್ಧಿವಾದ ಹೇಳಿದ ಮುಖ್ಯ ಶಿಕ್ಷಕಿಯ ಮೇಲೆಯೇ ವಿದ್ಯಾರ್ಥಿಯೊಬ್ಬ ಕಲ್ಲು ಹಿಡಿದು ದಾಳಿಗೆ ಮುಂದಾದ ಆಘಾತಕಾರಿ ಘಟನೆ ರಾಯಚೂರು ತಾಲೂಕಿನ ಪಂಚಮುಖಿ ಸರ್ಕಾರಿ ಪ್ರೌಢಶಾಲೆಯಲ್ಲಿ ವರದಿಯಾಗಿದೆ.

ಮಾತಿನ ಚಕಮಕಿ ಹಾಗೂ ಕಲ್ಲು ಎಸೆಯುವ ಯತ್ನ:

ಎರಡು ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ, ವಿದ್ಯಾರ್ಥಿಯು ಪ್ರತಿದಿನ ಶಾಲೆಗೆ ಮೊಬೈಲ್ ತರುತ್ತಿರುವುದನ್ನು ಕಂಡ ಮುಖ್ಯ ಶಿಕ್ಷಕಿ ಶಶಿಕಲಾ ಅವರು ಅದನ್ನು ಪ್ರಶ್ನಿಸಿ ತಿಳಿಹೇಳಲು ಯತ್ನಿಸಿದ್ದಾರೆ. ಈ ವೇಳೆ ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವೆ ವಾಗ್ವಾದ ಬೆಳೆದಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಯು ಶಾಲಾ ಆವರಣದಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿಕೊಂಡು ಮುಖ್ಯ ಶಿಕ್ಷಕಿಯ ಕಾರಿನತ್ತ ಎಸೆಯಲು ಧಾವಿಸಿದ್ದಾನೆ. ಈ ಘಟನೆಯಿಂದಾಗಿ ಶಾಲೆಯಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ – ಪಂಚಾಯಿತಿ ನಡೆಸಿದ ಗ್ರಾಮಸ್ಥರು:

ವಿದ್ಯಾರ್ಥಿಯು ಕಲ್ಲು ಹಿಡಿದು ಕಾರಿಗೆ ಎಸೆಯಲು ಬಂದ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಊರಿನ ಪ್ರಮುಖರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, ಪ್ರಕರಣವನ್ನು ರಾಜಿ-ಸಂಧಾನದ ಮೂಲಕ ಬಗೆಹರಿಸಲು ಯತ್ನಿಸಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *