

ಎಡಪದವು ಬಳಿ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ .
ಬಂಧಿತರನ್ನು ಬಂದರಿನ ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್ ಹಾಗೂ ಅಕ್ರಮ್ ,ಸಾಧಿಕ್ ಎಂದು ತಿಳಿದುಬಂದಿದೆ.ಸಿನಾನ್ ರೌಡಿಶೀಟರ್ ಆಗಿದ್ದು ಅನೇಕ ಅಪರಾಧದಲ್ಲಿ ಭಾಗಿಯಾಗಿದ್ದನು,ಇರ್ಷಾದ್ ಬೆಂಗಳೂರಿನಲ್ಲಿ ಬೈಕ್ ಕಳವು ಪ್ರಕರಣದಲ್ಲಿ ಬಂಧಿಸಿದ್ದು ಬೇಲ್ ಮೂಲಕ ಕೆಲ ದಿನಗಳ ಹಿಂದ ಹೊರಬಂದಿದ್ದನೆಂದು ಮಾಹಿತಿ ದೊರೆತಿದೆ.


