

ಮಂಗಳೂರು ಉಳ್ಳಾಲ: ಇದೇ ಕಳೆದ ಮಾರ್ಚ್ 17 ರಂದು ತಲಪಾಡಿಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಿದ್ದಿಕ್ ತಲಪಾಡಿ ಬಿಜೆಪಿ ಸೇರ್ಪಡೆ ಗೊಂಡಿದ್ದು, ಸತತ 20 ವರ್ಷಗಳಿಂದ ಕಾಂಗ್ರೇಸ್ ಪಾರ್ಟಿಯ ಬೆಳವಣಿಗೆಗೆ ಪಾತ್ರರಾಗಿದ್ದ ಇವರು ಕೊರೊನ ಸಮಯದಲ್ಲಿ ಕಿಟ್ ವಿತರಣಾ ಕಾರ್ಯಕ್ರಮಗಳು ಇವರ ತಂಡದಿಂದ ನಡೆದಿತ್ತು ಹಾಗೂ ಶಾಲಾ ಮಕ್ಕಳಿಗೆ ಬುಕ್ ವಿತರಣೆ, ತಲಪಾಡಿ ಟೋಲ್ ಗೇಟ್ ಹೋರಾಟದಲ್ಲಿ ಸಕ್ರಿಯವಾಗಿ ಹೋರಾಟ ನಡಿಸಿದ ಇವರು ಸಾಮಾಜಿಕ ಹಾಗು ರಾಜಕೀಯ ಕ್ಧೇತ್ರದಿಂದ ಹಲವು ನಿರ್ಗತಿಕರಿಗೆ ಸಹಾಯ ಹಸ್ತ ಹೆಸಗಿದ್ದು, ಹಲವು ವರ್ಷಗಳಿಂದ ಸ್ಥಳೀಯ ಸಂಘ ಸಂಸ್ಥೆ ಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಉಳ್ಳಾಲ ಕ್ಷೇತ್ರದ ಬಿಜೆಪಿ ಅಲ್ಪಸಂಖ್ಯಾತ ಘಟಕದೊಂದಿಗೆ ಸೇರಿ ಕೊಂಡು ಬಿಜೆಪಿಗೆ ಬಲ ಕೊಡುವಂತಹ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಮತ್ತು ಉಳ್ಳಾಲ ಕ್ಷೇತ್ರದ ಸಾರ್ವಜನಿಕರಿಗೆ ಸರಕಾರದ ಸೌಕರ್ಯಗಳನ್ನು ಜಾತಿ ಧರ್ಮ ಬೇಧವಿಲ್ಲದೆ ಒಂದೇ ಸಮಾನತೆಯಲ್ಲಿ ಎಲ್ಲರಿಗೂ ತಲುಪಿಸುವ ಉದ್ದೇಶ ಇವರದಾಗಿದೆ





