
ಜಯಾನಂದ್ ಬಂಗೇರರ ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ, ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ನಾಯಕರು ಕಾರ್ಯಕರ್ತನಿಗೆ ದೈರ್ಯ ತುಂಬಿದರು.
ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಅರುಣ್ ಪುತ್ತಿಲ, ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನಾಗರೀಕರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಕೊಟ್ಟಿದೆ. ಹಾಗೆಂದು ಗೂಂಡಾವರ್ತನೆ ನಡೆಸುವುದು ಎಷ್ಟು ಸರಿ ..? ಈಗಾಗಲೇ ಇಬ್ಬರ ವಿರುದ್ದ ಕೇಸ್ ದಾಖಲಾಗಿದೆ. ಅದರಲ್ಲಿ ಹಲವು ವ್ಯಕ್ತಿಗಳಿದ್ದರು. ವಿಡಿಯೋ ದಾಖಲೆ ಇದೆ. ಎಲ್ಲರ ವಿರುದ್ದ ಪ್ರಕರಣ ದಾಖಲಾಗಬೇಕು ಎಂದು ಪೋಲೀಸ್ ಅಧಿಕಾರಿಗಳಲ್ಲಿ ಪುತ್ತಿಲ ಒತ್ತಾಯಿಸಿದರು.



