

ಲೋಕಸಭೆ ಚುನಾವಣೆ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರನ್ನಾಗಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವಿಜಯೇಂದ್ರ ನೇಮಿಸಿ ಗುರುವಾರ ಆದೇಶಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಪಕ್ಷದ ರಾಷ್ಟ್ರೀಯ ನಾಯಕರ ಚುನಾವಣಾ ಪ್ರಚಾರ ಕಾರ್ಯಕ್ರಮಗಳ ಮೇಲ್ವಿಚಾರಣೆ, ಪ್ರಚಾರದ ಕಾರ್ಯತಂತ್ರ ಅನುಷ್ಠಾನದ ಜವಾಬ್ದಾರಿಯಿದೆ. ಕಾಲಕಾಲಕ್ಕೆ ವಸ್ತು ಸ್ಥಿತಿ ಮಾಹಿತಿ ಸಂಗ್ರಹ, ಆಯಾ ಕ್ಷೇತ್ರಕ್ಕೆ ಸಲಹೆ ಸೂಚನೆಗಳ ರವಾನೆ ಇತ್ಯಾದಿ ಚಟುವಟಿಕೆಗಳನ್ನು ಸಮಿತಿ ಸಂಚಾಲಕರು ನಿರ್ವಹಿಸಬೇಕಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


