
ಪುತ್ತೂರು: ತುಮಕೂರಿನಲ್ಲಿ ಭಯೋತ್ಪಾದನಾ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ
ಭಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ್
ಮುರಳೀಕೃಷ್ಣ ಹಸಂತ್ತಡ್ಕ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತುಮಕೂರಿನಲ್ಲಿ ಇಂದು ನಡೆಯಲಿರುವ ಭಯೋತ್ಪಾದನಾ ವಿರೋಧಿ ಪ್ರತಿಭಟನಾ ರಾಲಿಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಮುರಳೀಕೃಷ್ಣ ಹಸಂತ್ತಡ್ಕ ಅವರನ್ನುಬೆಂಗಳೂರು ಗ್ರಾಮಾಂತರ ಕುಣಿಗಲ್ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ತೆರಳುವ ದಾರಿ ಮಧ್ಯೆಯೇ ಅವರನ್ನು ಬಂಧಿಸಿದ ಪೋಲೀಸರ ನಡೆಗೆ ಎಲ್ಲೆಡೆಯೂ ವಿರೋಧ ವ್ಯಕ್ತವಾಗಿದೆ.


