ಬಂಟ್ವಾಳ : ಕೆಲಸ ಸಿಗದೆ ಖಿನ್ನತೆಗೊಳಗಾಗಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಬಂಟ್ವಾಳ : ಪದವಿಧರನಾಗಿದ್ದರೂ ಸೂಕ್ತ ಕೆಲಸ ಸಿಗದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.ಪುತ್ತೂರಿನ ನಿವಾಸಿಯಾದ ಆನಂದ ಎನ್ನುವರ ಮಗನಾದ ನಿಶ್ಚಿತ್ ಎಂಬಾತ ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.ಕೂಡಲೆ ಸ್ಥಳಿಯರು ಯುವಕನನ್ನು ರಕ್ಷಿಸಿದ್ದಾರೆ.

ಎಂಎಸ್‍ಡಬ್ಲ್ಯು ಪದವಿಧರನಾಗಿದ್ದ ನಿಶ್ಚಿತ್ ಕೆಲಸ ಸಿಗದೆ ತೀರ್ವನೊಂದು ಮಾನಸಿಕ ಖಿನ್ನತಗೆ ಒಳಗಾಗಿದ್ದ. ನಿರುದ್ಯೋಗಿಯಾಗಿದ್ದ ನಿಶ್ಚಿತ್ ಕೆಲಸ ಸಿಗದೆ ಬಹಳಷ್ಟು ನೊಂದಿದ್ದ. ಹೀಗಾಗಿ ಇಂದು ತನ್ನ ದ್ವಿಚಕ್ರದಲ್ಲಿ ಬಂದು ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಹನೀಫ್ , ಸಲ್ಮಾನ್ ಫಾರಿಸ್ , ಇರ್ಫಾನ್ ಖಲೀಲ್ ತಸ್ಲೀ ಆರೀಪ್ , ಎನ್ನಿತರ ಯುವಕರು ಬಂದು ನಿಶ್ಚಿತ್ ನನ್ನು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬAಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಗಿದ್ದು, ಯುವಕನ್ನು ವಿಚಾರಣೆ ನಡೆಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *