ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳಲ್ಲಿ ಜೂಜಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಕಳ್ಳಿಗೆ ಗ್ರಾಮದ ರೈಲ್ವೇ ಹಳಿಯ ಬಳಿ ಹಣವನ್ನು ಪಣವಾಗಿಟ್ಟು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳಲ್ಲಿ ಜೂಜಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳಾದ ಮೊಹಮ್ಮದ್‌ ರಿಯಾಝ್, ಅಬ್ದುಲ್ಲ, ಅಬ್ದುಲ್‌ ಅಝೀಝ್ನನ್ನು ನಗರ ಠಾಣಾ ಪಿಎಸ್‌ಐ ಕಲೈಮಾರ್‌ ಪಿ. ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ.

ಸ್ಥಳದಲ್ಲಿದ್ದ 3,790 ರೂ. ನಗದು, ಇತರ ಸೊತ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

News Editor

Learn More →

Leave a Reply

Your email address will not be published. Required fields are marked *