ಪುತ್ತೂರು ಪುರಸಭಾ ಸದಸ್ಯ ಸಾವಿನಲ್ಲಿ ಸಂಶಯ-ದೂರು ದಾಖಲಿಸಿದ ಪುತ್ರ

ಬಂಟ್ವಾಳ: ನೇತ್ರಾವತಿ ನದಿ ಕಿನಾರೆಯಲ್ಲಿ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿದ ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಸಾವಿನ ಬಗ್ಗೆ ಸಂದೇಹವಿದ್ದು, ಕೂಲಂಕಷವಾಗಿ ತನಿಖೆ ನಡೆಸುವಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮೃತರ ಪುತ್ರ ವಿನೀಶ್ ದೂರು ನೀಡಿದ್ದಾರೆ.

ಪುತ್ತೂರು ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟು ಬಂಟ್ವಾಳಕ್ಕೆ ಬಂದಿದ್ದ ಇವರು ಬೈಕ್ ನಿಲ್ಲಿಸಿ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿದ್ದರು. ಘಟನೆಯ ಬಳಿಕ ಸಾವಿನ ಬಗ್ಗೆ ಸಾಕಷ್ಟು ಸಂದೇಹಗಳು ಮನೆಯವರಿಗೆ ಬಂದಿದ್ದು, ಇವರ ಮೊಬೈಲ್ ಫೋನ್ ಗೆ ಬಂದಿರುವ ಕರೆಗಳನ್ನು ಪರಿಶೀಲನೆ ನಡೆಸಬೇಕು, ಅವರಿಗೆ ಬಂದಿರುವ ಕರೆಗಳನ್ನು ಪರಿಶೀಲನೆ ನಡೆಸಿದಾಗ ಸಾವಿಗೆ ಕಾರಣಗಳು ಸಿಗಬಹುದು ಎಂಬುದರ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮೊಬೈಲ್ ಫೋನ್ ಸಿಮ್ ನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಲಾಗಿದೆ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರು ಯುವ ಕಾಂಗ್ರೆಸ್ ಸಭೆಯು ಶಾಸಕರಾದ ಅಶೋಕ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರಾದ ಅಖಿಲ್ ಕಲ್ಲಾರೆಯವರ ಅಧ್ಯಕ್ಷತೆಯಲ್ಲಿ ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಶ್ಚಿಮ ಘಟ್ಟದ ತಪ್ಪಲಿನಗ್ರಾಮಗಳಲ್ಲಿ ಒಂಟಿ ಸಲಗ ಹಾವಳಿ-ಸೀತಾನದಿ: ಮುಂದುವರಿದ ಆನೆ ಕಾಟ
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪುತ್ತೂರಿನ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರನಿಗೆ ನಿಂದನೆ ಆರೋಪಿ ಪುತ್ತೂರು ನಗರ ಠಾಣೆಗೆ ಹಾಜರು-ನೌಕರರಲ್ಲಿ ಕ್ಷಮೆಯಾಚನೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಅಹಮದಾಬಾದ್ ವಿಮಾನ ಪತನ: 53 ಬ್ರಿಟಿಷ್ ಪ್ರಜೆಗಳು, 169 ಭಾರತೀಯರು ವಿಮಾನದಲ್ಲಿದ್ರು