
ನಂಬರ್ 1 ಸಂಸದ ನಳಿನ್ ಕುಮಾರ್ ಕಟೀಲ್ ಇರುವವರೆಗೆ ನಮ್ಮ ಲಾಭಿ, ಅಕ್ರಮ, ಅನಾಚಾರಗಳಿಗೆ ಅವಕಾಶ ಲಭ್ಯವಿಲ್ಲ ಎನ್ನುವುದನ್ನು ಅರಿತಿರುವ ವಿರೋಧಿಗಳ ಪಿತೂರಿಯೇ ಇಂದಿನ ಅಪಪ್ರಚಾರ ಗಳಿಗೆ ಮೂಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ 15 ವರ್ಷಗಳಿಂದ ಸಂಸದರಾಗಿ ಟೀಕೆ ಆಪಾದನೆ ಅಪಪ್ರಚಾರ ಏನೇ ಇದ್ದರೂ ಸದಾ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ತರಿಸಿ ತನ್ನ ಟೀಕೆಗಳಿಗೆ ಅನುದಾನ ಅಭಿವೃದ್ಧಿಗಳಿಂದಲೇ ಉತ್ತರಿಸಿ, ದೇಶದ ಅನುದಾನ ಸದ್ಬಳಕೆಯ ನಂಬರ್ 1 ಸಂಸದರಾಗಿರುವುದೇ ಇಂದು ನಳಿನ್ ಕುಮಾರ್ ಇಷ್ಟೊಂದು ಟೀಕೆಗೆ ಒಳಗಾಗಲು ಕಾರಣ.
ಪಕ್ಷ ಸಂಘಟನೆಯ ನಾಯಕನಾಗಿ ಅಧಿಕಾರವಿರಲಿ ಇಲ್ಲದೆ ಇರಲಿ ಚಟುವಟಿಕೆಯನ್ನು ತನ್ನದಾಗಿಸಿರುವ ನಳಿನ್ ಕುಮಾರ್ ತಾನು ಮಾಡಿದ ಕಾರ್ಯಕ್ರಮಗಳನ್ನು ಅಭಿವೃದ್ಧಿ ಕಾರ್ಯಗಳನ್ನು ಎಲ್ಲಿಯೂ ಪ್ರಚಾರ ಮಾಡದೆ ತನ್ನ ಬೆಂಬಲಿಗರಿಗೂ ಪ್ರಚಾರ ಮಾಡಲು ಬಿಡದೆ ಜನ ಆಶೀರ್ವಾದ ನಮಗಿದ್ದರೆ ಸಾಕು ಎನ್ನುವ ನಮಗಿದ್ದರೆ ಸಾಕು ಎನ್ನುವ ಸಂಸದ. ಸಂಸದರನ್ನು ಹತ್ತಿರದಿಂದ ಬಲ್ಲವರು ಅವರ ಒಡನಾಟದಲ್ಲಿ ಇರುವವರು ಅವರಿಂದ ಪ್ರಯೋಜನ ಪಡೆದವರು ಎಂದಿಗೂ ಸಂಸದರನ್ನು ವಿರೋಧಿಸಲಾರರು.
ಈ 15 ವರ್ಷಗಳ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಇರುವ ಸಂಸದರು ನಮ್ಮ ಹೆಮ್ಮೆ ಇದರಿಂದಾಗಿಯೇ ವಿರೋಧಿಗಳಿಗೆ ಕೇವಲ ಅಪಪ್ರಚಾರ ಮಾತ್ರ ಅಸ್ತ್ರವಾಗಿದೆ ಸಾಬೀತುಪಡಿಸಲು ಒಂದೇ ಒಂದು ಸಾಕ್ಸ್ಯವೂ ಇಲ್ಲ….


